ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆರೆವಾಸದಲ್ಲಿದ್ದ ಆರು ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಶುಕ್ರವಾರ ಸುಪ್ರೀಂ ಕೋರ್ಟ್ ಆರೋಪಿಗಳ ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದಿರುವ ಕಾರಣ ಅವಧಿಗೂ ಮುನ್ನ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.
ಆರೋಪಿಗಳಾದ ರವಿಚಂದ್ರನ್, ನಳಿನಿ ಸೇರಿದಂತೆ ಆರು ಮಂದಿಯನ್ನು ಸಜೆಯಿಂದ ಮುಕ್ತ ಮಾಡಲಾಗಿದೆ. ನಳಿನಿ ಮತ್ತು ರವಿಚಂದ್ರನ್ ತಮಿಳುನಾಡಿನಲ್ಲೇ ಉಳಿದರೆ ಇನ್ನುಳಿದ ನಾಲ್ವರು ತಿರುಚಿನಪಳ್ಳಿಯ ಮೂಲಕ ಶ್ರೀಲಂಕಾಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.