ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆ ಎಲೆಕ್ಷನ್ ಗೆ ಸ್ಪರ್ಧೆ ಮಾಡುವಷ್ಟು ಆರ್ಥಿಕ ಶಕ್ತಿ ಇಲ್ಲ ಅನ್ನೋ ಹೇಳಿಕೆ ದೇಶದೆಲ್ಲೆಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ನಿರ್ಮಲಾ ಮಾತಿಗೆ ವಿರೋಧಿಗಳು ಸೋಷಿಯಲ್ ಮೀಡಿಯಾದಲ್ಲಿ ಸರಿಯಾಗಿಯೇ ಕಾಲೆಳೆಯುತ್ತಿದ್ದಾರೆ.
ತಮಿಳುನಾಡು ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ( DMK spokesperson Saravanan Annadurai) ಮಾತನಾಡಿ ಸಚಿವೆ ನಿರ್ಮಲಾ ವಿರುದ್ಧ ಹರಿಹಾಯ್ದಿದ್ದಾರೆ. ಎಲೆಕ್ಷನ್ ಗೆ ನಿಲ್ಲಲು ಹಣ ಮಾತ್ರ ಅಲ್ಲ. ಜನರ ಬೆಂಬಲ ಬೇಕು. ನಿರ್ಮಲಾ ಸೀತಾರಾಮನ್ ಗೆ ಜನರ ಬೆಂಬಲ ಇಲ್ಲ.
ಹೀಗಾಗಿಯೇ ಸುಖಾಸುಮ್ಮನೆ ಇಲ್ಲಸಲ್ಲದ ಹೇಳಿಕೆ ಕೊಡುತ್ತಿದ್ದಾರೆ. ದೇಶದ ಅರ್ಥ ಸಚಿವರು ಜನರ ಮನ್ನಣೆ ಗಳಿಸಿಲ್ಲ. ಸಣ್ಣಪುಟ್ಟ ಕಾರಣವೊಡ್ಡಿ ಎಲೆಕ್ಷನ್ ಗೆ ಸ್ಪರ್ಧೆ ಮಾಡದೆ ತಾವೊಬ್ಬ ಅಸಮರ್ಥ ನಾಯಕಿ ಅನ್ನೋದನ್ನ ಪದೇ ಪದೇ ಸಾಬೀತು ಪಡಿಸುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.
ನಿರ್ಮಲಾ ಚುನಾವಣೆ ರಾಜಕೀಯದಿಂದ ಹೆದರಿ ಓಡಿಹೋಗ್ತಿದ್ದಾರೆ. ಜನರಿಂದ ಆಯ್ಕೆಯಾದ ಪ್ರತಿನಿಧಿಯೇ ನಿಜವಾದ ಪ್ರತಿನಿಧಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕರು ಎನಿಸಿಕೊಳ್ಳಬೇಕಾದ್ರೆ ಜನರಿಂದ ಆಯ್ಕೆಯಾಗಿ ಅಧಿಕಾರ ನಡೆಸಬೇಕು. ನಿರ್ಮಿಲಾ ಸೀತಾರಾಮನ್ ದೇಶದ ಅರ್ಥ ವ್ಯವಸ್ಥೆಯನ್ನೇ ತನ್ನ ತಪ್ಪು ನಿರ್ಧಾರ ಗಳಿಂದ ಬದಲಿಸಿ ಹಾಳು ಮಾಡಿದ್ದಾರೆ ಎಂದು ಸರವಣನ್ ಅಣ್ಣಾ ದೊರೈ ವ್ಯಂಗ್ಯವಾಡಿದ್ದಾರೆ.