ಬೆಳಗಾವಿ : ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಸರ್ಕಾರವು ಕಾಂಗ್ರೆಸ್ ಹಾಗೂ ಜೆಡಿಎಸ್ನವರನ್ನು ಭ್ರಷ್ಟಾಚಾರದ ಕೇಸ್ನಡಿಯಲ್ಲಿ ಸಿಲುಕಿಸಲು ಅಧಿಕಾರಿಗಳಿಗೆ ಒತ್ತಡ ಹೇರುತ್ತಿದೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿಯವರಿಗೆ 50 ದಿನಗಳ ಬಳಿಕ ಈ ರಾಜ್ಯದಲ್ಲಿ ತಮ್ಮ ಆಡಳಿತ ಇರೋದಿಲ್ಲ ಎಂಬ ವಿಚಾರ ಚೆನ್ನಾಗಿ ತಿಳಿದಿದೆ. ಎಲೆಕ್ಷನ್ ಬರುತ್ತೆ, ಚುನಾವಣಾ ನೀತಿ ಸಂಹಿತೆ ಸಹಾ ಇರುತ್ತೆ ಅಂತಾ ಗೊತ್ತು . ಹೀಗಾಗಿ ಕಾಂಗ್ರೆಸ್ನವರನ್ನು ಹಿಡೀರಿ. ದಳದವರನ್ನು ಹಿಡೀರಿ ಅಂತಾ ಅಧಿಕಾರಿಗಳಿಗೆ ಸುಮ್ಮನೇ ಒತ್ತಡ ಹಾಕುತ್ತಿದ್ದಾರೆ ಅಂತಾ ಹೊಸ ಬಾಂಬ್ ಸಿಡಿಸಿದ್ದಾರೆ.
ಭ್ರಷ್ಟಾಚಾರದ ಕೇಸ್ನ ಬಳಿಕ ನಮಗೆ ಅವಮಾನವಾಗಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನೂ ಇಂತದ್ದೇ ಕೇಸ್ನಲ್ಲಿ ಸಿಲುಕಿಸಿ ಅಂತಾ ಲೋಕಾಯುಕ್ತ ಅಧಿಕಾರಿಗಳಿಗೆ ಬಿಜೆಪಿ ಸರ್ಕಾರವು ಒತ್ತಡ ಹೇರುತ್ತಿದೆ. ಯಾರಾದರೂ ಬ್ಯುಸಿನೆಸ್ ಮ್ಯಾನ್ ಇದ್ದರೆ ಅವರನ್ನು ಹಿಡೀರಿ. ಶಿವಕುಮಾರ್, ಸಿದ್ದರಾಮಯ್ಯ. ಕಾರ್ಯಾಧ್ಯಕ್ಷರ ಸುತ್ತಮುತ್ತ ಯಾರಾದರೂ ಉದ್ಯಮಿಗಳು ಹೆಚ್ಚಾಗಿ ಓಡಾಡುತ್ತಿದ್ದಾರಾ ಅಂತಾ ನಿಗಾ ವಹಿಸಿ ಅಂತೆಲ್ಲ ಲೋಕಾಯುಕ್ತ ಅಧಿಕಾರಿಗಳಿಗೆ ಬಿಜೆಪಿ ಸರ್ಕಾರ ಒತ್ತಡ ಹೇರಿದೆ ಅಂತಾ ಗಂಭೀರ ಆರೋಪ ಮಾಡಿದೆ.
ಈ ಕಳಂಕಿತ ಸರ್ಕಾರವನ್ನು ಜನರೇ ಕಿತ್ತು ಹಾಕಬೇಕಿದೆ. ಇದೇ ಕಾರಣಕ್ಕೆ ಮಾರ್ಚ್ 9ನೇ ತಾರೀಖು ಬೆಳಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಬಂದ್ಗೆ ಕರೆ ನೀಡಿದ್ದೇವೆ. ಭ್ರಷ್ಟಾಚಾರ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ. ನಮ್ಮೆಲ್ಲ ಕಾರ್ಯಕರ್ತರು ಶಾಂತಿಯುತವಾಗಿ ಈ ಪ್ರತಿಭಟನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.