ಮಹಾರಾಷ್ಟ್ರದಲ್ಲಿ ನಡೆದ ವಿಧಾನಪರಿಷತ್ ಚುನಾವಣೆ ನಂತರ ನಡೆದ ರಾಜಕೀಯ ಮಹತ್ತರ ಬೆಳವಣಿಗೆ ಸಂಬಂಧ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ರನ್ನು ಎಐಸಿಸಿ ವೀಕ್ಷಕರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.
ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದ ಹಾಲಿ ಸಚಿವ ಶಿವಸೇನೆ ನಾಯಕ ಏಕಾಂತ್ ಶಿಂಧೆ ಆಡಳಿತ ಸರ್ಕಾರದ ವಿರುದ್ದ ಬಂಡಾಯವೆದಿದ್ದು ಗುಜರಾತಿನ ರೆಸಾರ್ಟ್ ಒಂದರಲ್ಲಿ ತಂಗಿರುವುದಾಗಿ ತಿಳಿದು ಬಂದಿದೆ.
ಸೋಮವಾರ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಎಂವಿಎ ಮೈತ್ರಿ ಕೂಟವು 6 ಸ್ಥಾನಗಳಲ್ಲಿ ನಿರಾಯಸವಾಗಿ ಗೆಲ್ಲುತ್ತದೆ ಎಂದು ಹೇಳಲಾಗಿತ್ತು. ಆದರೆ, ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಅಡ್ಡ ಮತದಾನ ನಡೆದ ಕಾರಣ 1ರಲ್ಲಿ ಸೋತಿದೆ.
ಶಿವಸೇನೆ, ಎನ್ಸಿಪಿ ಹಾಗು ಕಾಂಗ್ರೆಸ್ 10 ಸ್ಥಾನಗಳಿಗೆ ತಲಾ ಇರು ಅಭ್ಯರ್ಥಿಗಳನ್ನ ಘೋಷಿಸಿತ್ತು ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ದಲಿತ ಸಮುದಾಯದ ಚಂದ್ರಕಾಂತ್ ಹಂದೋರೆ ಅಡ್ಡ ಮತದಾನದ ಪರಿಣಾಮ ಸೋಲುಂಡಿದ್ದಾರೆ. ಬಿಜೆಪಿ ಸ್ಪರ್ಧಿಸಿದ್ದ 5 ಸ್ಥಾನಗಳಲ್ಲು ನಿರಾಯಸವಾಗಿ ಗೆದ್ದು ಬೀಗಿದೆ.
ಇನ್ನು ಈ ಮಹತ್ತರ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಬಿಜೆಪಿಯವರು ಬಹುಮತವಿರುವ ಸರ್ಕಾರವನ್ನ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ದಿ ಒಟ್ಟಾರೆ ಮೂರನೇ ಪ್ರಯತ್ನವಾಗಿದೆ. ಮೈತ್ರಿ ಸರ್ಕಾರವು ಸಂಪೂರ್ಣ 5 ವರ್ಷಗಳನ್ನು ಪೂರೈಸಲಿದ್ದು ಮುಖ್ಯಮಂತ್ರಿ ಉದ್ದವ್ ಪರಿಸ್ಥಿತಿಯನ್ನು ಯಶಸ್ವಿಯಗಿ ನಿಭಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಸರ್ಕಾರ ಪತನವಾದರೆ ಬಿಜೆಪಿಯೊಂದಿಗೆ ಕೈಜೋಡಿಸುತ್ತೀರಾ ಎಂದು ಕೇಳಿದ್ದಕ್ಕೆ ಯಾವುದೇ ಕಾರಣಕ್ಕು ಇಲ್ಲ ಎಂದು ವದಂತಿಯನ್ನು ತಳ್ಳಿ ಹಾಕಿದ್ದಾರೆ.