ಪ್ರಮುಖ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಹಾಗೂ ನಿಂಬೆಯನ್ನು ಹೆಚ್ಚಾಗಿ ವಿಜುಯಪುರ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಹಲವಾರು ಸಂಕಷ್ಟಗಳ ಮಧ್ಯೆ ಈ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಮಾರುಕಟ್ಟೆ ದರ ಹಾಗೂ ಅತೀವೃಷ್ಟಿ, ಹವಾಮಾನ ಬದಲಾವಣೆ ಕಾರಣಗಳಿಂದ ನಿರೀಕ್ಷಿತ ಲಾಭ ಇಲ್ಲದಂತಾಗಿದೆ. ಇದರಾಚೆ ರೈತರು ದ್ರಾಕ್ಷಿ ದಾಳಿಂಬೆ ಹಾಗೂ ನಿಂಬೆಯನ್ನು ಅವಲಂಭಿಸಿದ್ದಾರೆ. ಸದ್ಯ ಜಿಲ್ಲೆಯಲ್ಲಿ ನಿಂಬೆ ಬೆಳೆಗಾರರಿಗೊಂದು ಸಂತಸದ ಸುದ್ದಿ ಸಿಕ್ಕಿದೆ. ಜಿಲ್ಲೆಯ ನಿಂಬೆಗೆ ಜಿಐ ಟ್ಯಾಗ್ ಸಿಗೋದು ಬಹುತೇಕ ಖಚಿತವಾಗಿದೆ. ಇದರಿಂದ ನಿಂಬೆ ಬೆಳಗಾರರ ಮುಖದಲ್ಲಿ ಮಂದಹಾಸ ಮೂಡಿದೆ.
ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ಹಾಗೂ ನಿಂಬೆ ಬೆಳಗಳ ತವರೂರು ಎಂದು ಕರೆಯಲಾಗುತ್ತದೆ. ಪ್ರಮುಖ ತೋಟಗಾರಿಕಾ ಬೆಳೆಗಳಾಗಿ ದ್ರಾಕ್ಷಿ ಹಾಗೂ ನಿಂಬೆಯನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ದ್ರಾಕ್ಷಿಯನ್ನು ಹೆಚ್ಚಾಗಿ ರಾಸಾಯನಿಕಗಳ ಮೇಲೆ ಅವಲಂಭಿತವಾಗಿ ಬೆಳೆದರೆ, ನಿಂಬೆಯನ್ನು ಹೆಚ್ಚಾಗಿ ಸಾವಯವ ಪದ್ದತಿಯಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ 12,000 ಕ್ಕೂ ಆಧಿಕ ಹೆಕ್ಟೇರ್ ಪ್ರದೇಶದಲ್ಲಿ ನಿಂಬೆಯನ್ನು ಬೆಳೆಯಲಾಗುತ್ತಿದೆ. ಇಡೀ ರಾಜ್ಯದಲ್ಲಿ ಹೆಚ್ಚಾಗಿ ನಿಂಬೆಯನ್ನು ವಿಜಯಪುರ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದ್ದು ಮೊದಲ ಸ್ಥಾನದಲ್ಲಿದೆ. ಇಡೀ ದೇಶದಲ್ಲಿ 4 ನೇ ಸ್ಥಾನದಲ್ಲಿದೆ.
ಆದರೆ ಮಾರುಕಟ್ಟೆ ವ್ಯವಸ್ಥೆ ಸಮಸ್ಯೆ, ನಿಗದಿತ ಬೆಲೆ ಇಲ್ಲದೇ, ಮಳೆಯ ಅಭಾವದಿಂದ ನಿಂಬೆ ಬೆಳೆಗಾರರು ಉತ್ತಮ ಲಾಭ ಗಳಿಸಲು ಸಾಧ್ಯವಾಗಿಲ್ಲಾ. ಆದರೆ ಹಲವು ಕಷ್ಟಗಳ ನಡುವೆ ನಿಂಬೆ ಕೃಷಿಯನ್ನು ಇಲ್ಲಿಯ ರೈತರು ಕೈಬಿಟ್ಟಿಲ್ಲಾ. ಇದೀಗ ನಿಂಬೆ ಬೆಳೆಗಾರರಿಗೆ ಸಂತಸದ ಸುದ್ದಿ ಸಿಕ್ಕಿದೆ. ಜಿಲ್ಲೆಯಲ್ಲಿ ಬೆಳೆಯುವ ನಿಂಬೆಯ ಉತೃಷ್ಟ ಗುಣಮಟ್ಟ, ಹೆಚ್ಚಾಗಿರೋ ಆಮ್ಲೀಯ ಗುಣ , ತೆಳುವಾದ ತಿರುಳು ಇರುವ ಕಾರಣ ಜಿಲ್ಲೆಯ ನಿಂಬೆ ಉತೃಷ್ಟ ಮಟ್ಟದ ಸಾಲಿಗೆ ಸೇರಿದೆ. ಈ ಕಾರಣದಿಂದ ವಿಜಯಪುರ ಜಿಲ್ಲೆಯ ನಿಂಬೆಗೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಆಫ್ ಗೂಡ್ಸ್ ಅಂದರೆ ಜಿಐ ಟ್ಯಾಗ್ ಸಿಗಲಿದೆ.
ತಮಿಳುನಾಡಿನ ಚೆನೈಲ್ಲಿರೋ ಜಿಯೋಗ್ರಾಫಿಕಲ್ ಇಂಡಿಕೇಶನ್ ರೆಜಿಸ್ಟ್ರೇಷನ್ ಕಚೇರಿಗೆ ಈಗಾಗಲೇ ಜಿಲ್ಲೆಯ ನಿಂಬೆಗೆ ಜಿಐ ಟ್ಯಾಗ್ ಲಭಿಸಲು ಬೇಕಾಗಿರೋ ಎಲ್ಲಾ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಬೆಳೆಯವ ನಿಂಬೆ ಜಿಐ ಟ್ಯಾಗ್ ಹೊಂದಲಿದೆ.
ಜಿಲ್ಲೆಯಲ್ಲಿ 12,000 ಹೆಕ್ಟೇರ್ ಪ್ರದೇಶ ಅಂದರೆ 30,000 ಎಕರೆಯಲ್ಲಿ ನಿಂಬೆಯನ್ನು ಬೆಳೆಯಲಾಗುತ್ತಿದೆ. ಆದರೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಹಾಗೂ ಉತ್ತಮ ದರ ಸಿಗದ ಕಾರಣ ನಿಂಬೆ ಬೆಳೆಗಾರರಿಗೆ ಹೆಚ್ಚು ಲಾಭ ಸಿಗುತ್ತಿರಲಿಲ್ಲಾ. ಜಿಲ್ಲೆಯಲ್ಲಿ ಸಾವಯವ ಪದ್ದತಿಯಲ್ಲಿ ನಿಂಬೆ ಬೆಳೆಯುತ್ತಿದ್ದರೂ ವ್ಯಾಪಾರಸ್ಥರ, ದಲ್ಲಾಲಿಗಳ ಮೇಲಾಟದಲ್ಲಿ ನಿಂಬೆ ಬೆಳೆಗಾರರಿಗೆ ಕಡಿಮೆ ದರ ಸಿಗುತ್ತಿತ್ತು. ಇದೀಗಾ ಇದೇ ನಿಂಬೆಗೆ ಜಿಐ ಟ್ಯಾಗ್ ಸಿಕ್ಕರೆ ರೈತರಿಗೆ ಅನಕೂಲವಾಗೋದ್ರಲ್ಲಿ ಯಾವುದೇ ಸಮಸ್ಯೆಯಿಲ್ಲಾ. ತಮಿಳುನಾಡಿನ ಚೆನೈಲ್ಲಿರೋ ಜಿಯೋಗ್ರಾಫಿಕಲ್ ಇಂಡಿಕೇಶನ್ ರೆಜಿಸ್ಟ್ರೇಷನ್ ಕಚೇರಿ ಆಧಿಕಾರಿಗಳು ವಾರದ ಹಿಂದೆ ನಿಂಬೆ ಬೆಳೆಯ ಕುರಿತಾದ 25 ವಿವಿಧ ಮಾಹಿತಿಯನ್ನು ಕೇಳಿದ್ದರು. ತೋಟಗಾರಿಕಾ ವಿಶ್ವವಿದ್ಯಾಲಯದ ವಿಜ್ಞಾನಿಗಳು 25 ಬಗೆಯ ಮಾಹಿತಿಯನ್ನು ಜಿಯೋಗ್ರಾಫಿಕಲ್ ಇಂಡಿಕೇಶನ್ ರೆಜಿಸ್ಟ್ರೇಷನ್ ಕಚೇರಿಗೆ ಕಳುಹಿಸಿಕೊಟ್ಟಿದ್ದಾರೆ.
ಸದ್ಯ ನಿಂಬೆಗೆ ಜಿಐ ಟ್ಯಾಗ್ ಲಭ್ಯವಾಗಲು ಇನ್ನೊಂದೇ ಮೆಟ್ಟಿಲು ಬಾಕಿಯಿದೆ. ಈ ಮೂಲಕವಾದರೂ ನಿಂಬೆಯನ್ನು ಬೆಳೆಯುವ ನಮಗೆ ಅನಕೂಲವಾಗಲೆಂದು ನಿಂಬೆ ಬೆಳೆಗಾರರು ಆಶಾ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಜಿಐ ಟ್ಯಾಗ್ ಸಿಕ್ಕರೆ ನಮ್ಮ ನಿಂಬೆಗೆ ಜಾಗತೀಕ ಗುರುರು ಸಿಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ ಉತ್ತಮ ದರವೂ ಸಿಗಲಿದೆ ಎಂದಿದ್ದಾರೆ.
ಎಲ್ಲವೂ ಅಂದುಕೊಂಡಂತಾದರೆ ಇನ್ನು ಕೆಲವೇ ದಿನಗಳಲ್ಲಿ ಬಸವನಾಡಿನ ನಿಂಬೆಗೆ ಜಿಐ ಟ್ಯಾಗ್ ಸಿಗಲಿದೆ. ತಮಿಳುನಾಡಿನ ಚೆನೈಲ್ಲಿರೋ ಜಿಯೋಗ್ರಾಫಿಕಲ್ ಇಂಡಿಕೇಶನ್ ರೆಜಿಸ್ಟ್ರೇಷನ್ ಕಚೇರಿ ಆಧಿಕಾರಿಗಳು ವಿಜಯಪುರ ಜಿಲ್ಲೆಯ ನಿಂಬೆಗೆ ಜಿಐ ಟ್ಯಾಗ್ ನೀಡುವುದರ ಕುರಿತು ಕೊನೆಯ ಹಂತದ ಪರಾಮರ್ಶೆ ಮಾಡುತ್ತಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಜಿಐ ಟ್ಯಾಗ್ ಮಾನ್ಯತೆ ಸಿಗುವ ಎಲ್ಲಾ ಗುಣಗಳು ವಿಜಯಪುರ ಜಿಲ್ಲೆಯ ನಿಂಬೆ ಹೊಂದಿದೆ. ಕಾರಣ ಜಿಲ್ಲೆಯ ನಿಂಬೆಗೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಆಫ್ ಗೂಡ್ಸ್ ಮಾನ್ಯತೆ ಸಿಗುವಂತಾಗಲಿದೆ. ಆ ಮೂಲಕ ನಮಗೆ ಅನಕೂಲವಾಗಲಿ ಎಂಬ ನಿರೀಕ್ಷೆಯಲ್ಲಿ ನಿಂಬೆ ಬೆಳೆಗಾರರು ಇದ್ದಾರೆ.