ವಿಪರಿಯಾಸ ಅಂದ್ರೆ ಸಂವಿಧಾನದ ನಾಲ್ಕನೇ ಸ್ತಂಭ ಎಂದು ಕರೆಯಲ್ಪಡುವ ನಮ್ಮ ದೇಶದ ಮಾಧ್ಯಮಾನಗಳು ಇಂಥ ಗಂಭೀರ ವಿಚಾರವನ್ನು ದೇಶದ ಜನರ ಮುಂದೆ ಸಂಪೂರ್ಣ ತೆರೆದಿಡಬೇಕಿತ್ತು. ಆದ್ರೆ ಯಾವುದೇ ರಾಷ್ಟ್ರೀಯ ಮಾಧ್ಯಮವಾಗಲಿ ಅಥವಾ ಸ್ಥಳೀಯ ಮಾಧ್ಯಮಗಳಾಗಲಿ ಈ ಬಗ್ಗೆ ತುಟಿ ಬಿಚ್ಚುತಿಲ್ಲ.
ಮಾಧ್ಯಮಗಳನ್ನು ಪ್ರಜಾಪ್ರಭತ್ವದ ವಾಚ್ ಡಾಗ್ಸ್ ಅಂಥ ಕರೆಯಲಾಗುತ್ತೆ. ಆದ್ರೆ ಇತ್ತೀಚೆಗೆ ಮಾಧ್ಯಮಗಳು ಕೂಡ ಸಂಪೂರ್ಣ ಸರ್ಕಾರದ ನಿಯಂತ್ರಣದಲ್ಲಿದ್ಯಾ ಎನ್ನುವಂತೆ ಭಾಸವಾಗ್ತಿದೆ. ಸಾವಿರಾರು ಕೋಟಿ ಹಣ ಈ ರೀತಿ ಉದ್ಯಮಿಗಳಿಂದ ರಾಜಕೀಯ ಪಕ್ಷಗಳಿಗೆ ವಿನಿಮಯವಾಗಿರೋದ್ರ ಹಿಂದಿನ ಉದ್ದೇಶವೇನು , ಎಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ.. ಯಾವೊಂದು ವಿಚಾರವನ್ನು ಮಾಧ್ಯಮಗಳು ಮಾತನಾಡುತ್ತಿಲ್ಲ.
ನಿಯಮಗಳ ಪ್ರಕಾರ ಒಂದು ಸಂಸ್ಥೆ ತನ್ನ ಲಾಭದ ಶೇಕಡಾ 7.5ರಷ್ಟು ಮೊತ್ತವನ್ನು ದೇಣಿಗೆಯಾಗಿ ನೀಡಬಹುದು ಅಷ್ಟೆ. ಆದ್ರೆ ಇಲ್ಲಿ ಹಲವಾರು ಸಂಸ್ಥೆಗಳು ತಮ್ಮ ನಿವ್ವಳ ಲಾಭದ 10 ಪಟ್ಟು ಹೆಚ್ಚು ಮೊತ್ತವನ್ನು ಬಿಜೆಪಿಗೆ ದೇಣಿಗೆಯಾಗಿ ನೀಡಿವೆ. ಇದನ್ನು ಪ್ರಶ್ನೆ ಮಾಡುವವರು ಯಾರು ? ಯಾವ್ ಉದ್ದೇಶದಿಂದ ಉದ್ಯಮ ಸಂಸ್ಥೆಗಳು, ಕಾಂಟ್ರಾಕ್ಟ್ ದಾರರು , ಇತರೆ ವರ್ಗದವರು ಎಷ್ಟು ಬೃಹತ್ ಮೊತ್ತಮ್ಮ ಆಡಳಿತ ಪಕ್ಷಗಳಿಗೆ ನೀಡಿವೆ ?! ಒಂದು ವೇಳೆ ಇದರಲ್ಲಿ ಯಾವುದೇ ಅವ್ಯವಹಾರ ಇಲ್ಲದಿದ್ದರೆ ಎಲೆಕ್ಟೊರಲ್ ಬೈಂಡ್ ಗಳ ಅವಶ್ಯಕತೆ ಏನಿತ್ತು ? ಎಲ್ಲವನ್ನೂ ಪಾರದಶಕವಾಗಿಯೇ ಸ್ವೀಕರಿಸಬಹುದಿತ್ತು. ದೇಣಿಗೆದಾರರ ಗೌಪ್ಯತೆ ಕಾಪಾಡುವ ಅವಶ್ಯಕತೆ ಏನಿತ್ತು ?! ಈ ಪ್ರಶ್ನೆಗಳನ್ನ ಕೇಳುವವರೇ ಇಲ್ಲದಂತಾಗಿದೆ.
ಈ ಮುಂಚಿನಿಂದಲೂ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಮಾತೆತ್ತಿದ್ರೆ ಅಂಬಾನಿ , ಅದಾನಿ ಮೇಲೆ ಆರೋಪ ಮಾಡ್ತಿದ್ರು. ಇಂಥವರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಬೇಕಾದ್ದೆಲ್ಲವನ್ನೂ ಮಾಡುತ್ತಿದೆ ಎಂದು ಮೇಲಿಂದ ಮೇಲೆ ದೂರುತ್ತಿದ್ದರು. ಆದ್ರೆ ಈಗ ಬಿಜೆಪಿಗೆ ಬರೋಬ್ಬರಿ ಆರು ಸಾವಿರದ ಆರುನೂರ ತೊಂಬತ್ತು ಕೋಟಿ ದೇಣಿಗೆ ಪೈಕಿ ಈ ವ್ಯಕ್ತಿಗಳದ್ದೇ ಸಿಂಹಪಾಲು ಇರೋದ್ರಿಂದ.. ವಿಪಕ್ಷಗಳ ಆರೋಪ ಸತ್ಯ ಇರಬಹುದು ಅಂತ ಅನ್ನಿಸೋದ್ರಲ್ಲಿ ತಪ್ಪಿಲ್ಲ. ಇದೆಲ್ಲವನ್ನ ದೇಶದ ಜನರ ಮುಂದಿಟ್ಟು , ಜಾಗರೂಕತೆಯಿಂದ ನಿಮ್ಮ ಮುಂದಿನ ನಾಯಕನನ್ನ ಆಯ್ಕೆ ಮಾಡಿ ಎಂದು ದೇಶದ ಜನರಿಗೆ ತಿಳಿಹೇಳಬೇಕಿದ್ದ ಮಾಧ್ಯಮಗಳು ಸುಮ್ಮನಾಗಿದ್ದು.. ಈ ಇಡೀ ವ್ಯವಸ್ಥೆ ಪ್ರಜಾಪಭುತ್ವವನ್ನ ಅಣಕಿಸುವಂತಿದೆ.