ರಾಜ್ಯದಲ್ಲಿ ಪ್ರತಿದಿನ ಹಿಜಾಬ್ ಕೇಸರಿ ಶಾಲು ವಿವಾದ (Hijab Row) ತಾತಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ (dakshina Kannada) ಎಲ್ಲಾ ಶಾಲಾ-ಕಾಲೇಜುಗಳ (school and college) ಸುತ್ತಮುತ್ತ ಪ್ರಸ್ತುತ ಚಾಲ್ತಿಯಲ್ಲಿರುವ ನಿಷೇಧಾಜ್ಞೆಗಳನ್ನು (144 session) ಫೆಬ್ರವರಿ 26 ರವರೆಗೆ ವಿಸ್ತರಿಸಿದೆ ಎಂದು ಜಿಲ್ಲಾಢಳಿತ ತಿಳಿಸಿದೆ. ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಲಾ-ಕಾಲೇಜುಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಫೆ.19ರ ಸಂಜೆ 6ರಿಂದ ಫೆ.26ರ ಸಂಜೆ 6ರವರೆಗೆ ನಿಷೇಧಾಜ್ಞೆ ವಿಸ್ತರಣೆಯಾಗಿದೆ ಎಂದು ಆದೇಶ ಹೊರಡಿಸಲಾಗಿದೆ.
ಈ ಹಿಂದೆ ಫೆ.14 ಬೆಳಿಗ್ಗೆ 6ರಿಂದ ಫೆ.19 ಸಂಜೆ 6 ವರಗೆ ನಿಷೇಧಾಜ್ಙೆ ವಿಧಿಸಲಾಗಿತ್ತು. ಆದರೆ ಈ ಒಂದು ವಿವಾದ ಮುಗಿಯದ ಕಾರಣ ಮುಂಜಾಗ್ರತ ಕಾರಣ ಮತ್ತೆ ಒಂದು ವಾರಗಳ ಕಾಲ ನಿಷೇಧಾಜ್ಞೆ ವಿಸ್ತರಣೆ ಮಾಡಲಾಗಿದೆ.