ಕೇಂದ್ರದ ಜನವಿರೋಧಿ ನೀತಿ, ಬಂಗಾಳದಲ್ಲಿ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದ ಬರಾಕ್ಪುರದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಭಾನುವಾರ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಕೋಲ್ಕತ್ತಾದ ಕ್ಯಾಮಾಕ್ ಸ್ಟ್ರೀಟ್ ಕಚೇರಿಯಲ್ಲಿ ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಸಿಂಗ್ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು.
ಟಿಎಂಸಿಗೆ ಸೇರ್ಪಡೆಯಾದ ನಂತರ ಸಂಸದ ಅರ್ಜುನ್ ಸಿಂಗ್ ಮಾತನಾಡಿ, “ಬಂಗಾಳದ ಅಭಿವೃದ್ಧಿ ಕಡೆ ತೃಣಮೂಲ ಕಾಂಗ್ರೆಸ್ ಕೆಲಸ ಮಾಡುತ್ತಿರುವ ರೀತಿ ಶ್ಲಾಘನೀಯ. ನಾನು ಸೆಣಬಿನ ಗಿರಣಿ ಪ್ರದೇಶದವನಾಗಿದ್ದು, ಕೇಂದ್ರದ ಜನವಿರೋಧಿ ನೀತಿಗಳಿಂದ ಅಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಜೆಪಿ ಫೇಸ್ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಿಗೆ ಸೀಮಿತವಾಗಿದೆ. ಫೇಸ್ ಬುಕ್ ನಲ್ಲಿ ಮಾತ್ರ ರಾಜಕೀಯ ಮಾಡಲು ಸಾಧ್ಯವಿಲ್ಲ. ಗ್ರೌಂಡ್ಗೆ ಹೋಗಿ ಕೆಲಸ ಮಾಡುವುದು ಮುಖ್ಯ. ಬಿಜೆಪಿ ನಾಯಕರು ಎಸಿ ರೂಂ ನಲ್ಲಿ ಕುಳಿತು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಸಿದ್ದಾರೆ.
ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತಾ, ಅಭಿಷೇಕ್ ಬ್ಯಾನರ್ಜಿ ಟ್ವೀಟ್ ಮಾಡಿದ್ದು: ” ಬಿಜೆಪಿಯ ವಿಭಜಕ ಶಕ್ತಿಗಳನ್ನು ತಿರಸ್ಕರಿಸಿ ಇಂದು ತೃಣಮೂಲ ಕಾಂಗ್ರೆಸ್ ಕುಟುಂಬಕ್ಕೆ ಸೇರ್ಪಡೆಗೊಂಡ ಸಂಸದ ಅರ್ಜುನ್ ಸಿಂಗ್ ಅವರಿಗೆ ಆತ್ಮೀಯ ಸ್ವಾಗತಿಸುತ್ತೇನೆ. ರಾಷ್ಟ್ರದಾದ್ಯಂತ ಜನರು ಬಳಲುತ್ತಿದ್ದಾರೆ ಮತ್ತು ಅವರಿಗೆ ಹಿಂದೆಂದಿಗಿಂತಲೂ ಈಗ ನಮ್ಮ ಅವಶ್ಯಕತೆಯಿದೆ. ಹೋರಾಟವನ್ನು ಜೀವಂತವಾಗಿಡೋಣ. ” ಎಂದು ಟ್ವೀಟ್ ಮಾಡಿದ್ದಾರೆ.
ಅರ್ಜುನ್ ಸಿಂಗ್ ಅವರ ರಾಜಕೀಯ ವೃತ್ತಿಜೀವನ
ಅರ್ಜುನ್ ಸಿಂಗ್ ತಮ್ಮ ರಾಜಕೀಯ ವೃತ್ತಿಜೀವನವನ್ನು ಕಾಂಗ್ರೆಸ್ನೊಂದಿಗೆ ಪ್ರಾರಂಭಿಸಿದರೂ, ಭಾಟ್ಪಾರಾ ಪುರಸಭೆಯ ಚುನಾವಣೆಯಲ್ಲಿ ಕೌನ್ಸಿಲರ್ ಆಗಿ ಗೆದ್ದರು. 2001ರಲ್ಲಿ ಸಿಪಿಐ(ಎಂ) ಅಭ್ಯರ್ಥಿ ರಾಮಪ್ರಸಾದ್ ಕುಂದು ಅವರನ್ನು ವಿರುದ್ಧ ಗೆದ್ದು ತೃಣಮೂಲ ಕಾಂಗ್ರೆಸ್ನೊಂದಿಗೆ ರಾಜ್ಯ ವಿಧಾನಸಭೆಗೆ ಪ್ರವೇಶಿಸಿದರು.
2019ರಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿ ಬ್ಯಾರಕ್ಪುರದಲ್ಲಿ ಸ್ಪರ್ಧಿಸಿ ಭರ್ಜರಿಯಾಗಿ ಗೆದ್ದರು. ಆದರೆ ಪಕ್ಷದಲ್ಲಿ ಮತ್ತು ಸ್ಥೀಳಿಯ ರಾಜಕೀಯ ತಿಕ್ಕಾಟದಿಂದ ಬೇಸರ ಸಂಸದ ಅರ್ಜುನ್ ಸಿಂಗ್ ಬಿಜೆಪಿ ಅನ್ನು ತೊರೆದು ತನ್ನ ತವರು ಮನೆಯಾದ ಟಿಎಂಸಿ ಸೇರ್ಪಡೆಯಾಗಿದ್ದಾರೆ.