ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ತಮ್ಮ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೀಸಲಾತಿಯಿಂದ ಹಿಡಿದು ಮಹಾದೇವ್ ಬೆಟ್ಟಿಂಗ್ ಆ್ಯಪ್ನ ಭ್ರಷ್ಟಾಚಾರ ಆರೋಪಗಳ ಬಗ್ಗೆ ಮಾತನಾಡಬೇಕಾದರೆ ಜವಾಬ್ದಾರಿಯುತ ಸ್ಥಾನವನ್ನು ಹೊಂದಿರುವ ಪ್ರಧಾನಿ ಮೋದಿ ಅವರು ಯೋಚನೆ ಮಾಡಿ ಮಾತಾಡಬೇಕು ಇಲ್ಲದೇ ಹೋದರೆ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಬಾಘೆಲ್ ಮೋದಿಗೆ ತಿರುಗೇಟು ನೀಡಿದ್ದಾರೆ.
ಪ್ರಧಾನಿ ಮೋದಿ ಛತ್ತೀಸ್ಗಢಕ್ಕೆ ಬಂದು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಕೂಡ ಒಬಿಸಿಯಿಂದ ಬಂದವನು. ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ತಿದ್ದುಪಡಿ ಮಾಡಿ ಒಬಿಸಿಗೆ ಬಂದಿದ್ದರು. ನೀವು ಜವಾಬ್ದಾರಿಯ ಸ್ಥಾನದಲ್ಲಿ ಕುಳಿತಿದ್ದೀರಿ ಮತ್ತು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ನೀವೇಕೆ ಜಾತಿ ಗಣತಿ ಮಾಡಬಾರದು? ನೀವು ಯಾಕೆ ಭಯಪಡುತ್ತೀರಿ? ಛತ್ತೀಸ್ಗಢ ಸಿಎಂ ಸುದ್ದಿ ಸಂಸ್ಥೆ ANIಗೆ ಹೇಳಿದ್ದಾರೆ.
ದೊಡ್ಡ ಸುಳ್ಳುಗಾರ ಯರು ಎಂದು ಹುಡುಕಿದರೆ ‘ಪ್ರಧಾನಿ ಮೋದಿಯವರ ಮುಖ ಬರುತ್ತದೆ’ ಎಂದು ಬಘೇಲ್ ಟೀಕಿಸಿದ್ದಾರೆ. “ಬಿಜೆಪಿಯವರ ಆಟ ನವೆಂಬರ್ 17 ರವರೆಗೆ ಮಾತ್ರ. ನಮ್ಮ ವಿರುದ್ಧ ಹೋರಾಡಲು ಸಾಧ್ಯವಾಗದಿದ್ದಾಗ, ನೀವು ಇಡಿಯನ್ನು ಮುಂದಿಡುತ್ತೀರಿ, ಇದನ್ನು ಹೊರತುಪಡಿಸಿ ನೀವು ಇನ್ನೇನು ಮಾಡಬಹುದು? ಮಹದೇವ್ ಆನ್ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಬಿಜೆಪಿ ಭಾಗಿಯಾಗಿದೆ ಎಂದು ಆರೋಪಿಸಿದರು.
ಸ್ವಾತಂತ್ರ್ಯದ ನಂತರ ಹಲವು ವರ್ಷಗಳ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದರೂ ಒಬಿಸಿ ಸಮುದಾಯಕ್ಕೆ ಮೀಸಲಾತಿಯನ್ನು ಜಾರಿಗೆ ತಂದಿಲ್ಲ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಭೂಪೇಶ್ ತಮ್ಮ ಆಡಳಿತದ ಅವದಿಯಲ್ಲಿ ಅವರ ಮಗ, ಸಂಬಂಧಿಕರು ಮತ್ತು ಅಧಿಕಾರಿಗಳ ವಿರುದ್ಧ ಸಾಲು ಸಾಲು ಭ್ರಷ್ಟಾಚಾರ ಆರೋಪದ ಮಾಡಿದ್ದರು.
ನಾನು ಕಾಂಗ್ರೆಸ್ಗೆ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ. ‘ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣ’ ₹ 508 ಕೋಟಿ ಮೌಲ್ಯದ್ದಾಗಿದ್ದು , ತನಿಖಾ ಸಂಸ್ಥೆಗಳು ಈ ಪ್ರಕರಣದಲ್ಲಿ ಸಾಕಷ್ಟು ಹಣವನ್ನು ವಶಪಡಿಸಿಕೊಂಡಿವೆ. ಛತ್ತೀಸ್ಗಢ ಸಿಎಂ ಆಪ್ತರೊಬ್ಬರು ಕೂಡ ಜೈಲಿನಲ್ಲಿದ್ದಾರೆ. ಇದರಲ್ಲಿ ಸಿಎಂ ಎಷ್ಟು ಹಣ ಪಡೆದಿದ್ದಾರೆ ಎಂಬುದನ್ನು ಕಾಂಗ್ರೆಸ್ ಬಹಿರಂಗಪಡಿಸಬೇಕು,” ಎಂದು ಪ್ರಧಾನಿ ಆಗ್ರಹಿಸಿದ್ದರು.
ಛತ್ತೀಸ್ಗಢದ ಒಟ್ಟು 90 ವಿಧಾನಸಭಾ ಸ್ಥಾನಗಳ ಪೈಕಿ 20 ಕ್ಷೇತ್ರಗಳಿಗೆ ನವೆಂಬರ್ 7 ರಂದು ಮತದಾನ ನಡೆದಿದ್ದು, ಉಳಿದ 70 ಸ್ಥಾನಗಳಿಗೆ ನವೆಂಬರ್ 17 ರಂದು ಮತದಾನ ನಡೆಯಲಿದೆ.